ಮಕ್ಕಳಲ್ಲಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೂಡಿಸಲು ಪ್ರತೀ ವರ್ಷ ನಡೆಸುವಂತೆ ಈ ವರ್ಷವೂ ಶಾಲಾ ಚುನಾವಣೆ ನಡೆಸಲು ನಮ್ಮ ಕುಳೂರು ಶಾಲೆಯಲ್ಲಿ ಸಿದ್ಧತೆ ನಡೆಯುತ್ತಿದೆ.
ಈ ನಿಟ್ಟಿನಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಇಂದು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುವ ಶಾಲಾ ಮುಖ್ಯೋಪಾಧ್ಯಾಯರಿಗೆ ನಾಮ ಪತ್ರ ಸಲ್ಲಿಸಿದರು.
ಕೆಲವು ಮಾನದಂಡ ಹಾಗೂ ಅರ್ಹತೆಯನ್ನು ಇಟ್ಟುಕೊಂಡು ಅಭ್ಯರ್ಥಿಗಳು ತಮ್ಮನ್ನು ತಾವೇ ಆಯ್ಕೆ ಮಾಡಿಕೊಂಡಿದ್ದರು. ನಾಮ ಪತ್ರವನ್ನು ತಮ್ಮನ್ನು ಅನುಮೋದಿಸಿದ ಜೊತೆಗಾರರೊಂದಿಗೆ ಇಂದು ಸಲ್ಲಿಸಿದರು. ಬಳಿಕ ಪ್ರತೀ ಕ್ಲಾಸುಗಳಿಗೆ ತೆರಳಿ ಮತ ಯಾಚನೆ ಮಾಡಿದರು.
ನಾಳೆ ನಾಮಪತ್ರ ಹಿಂಪಡೆಯುವ ಕೊನೆಯ ದಿನವಾಗಿದೆ. ಬರುವ ಸೋಮವಾರದಂದು ಶಾಲಾ ಚುನಾವಣೆ ನಡೆಯಲಿದೆ. ಕೋವಿಡ್-19 ನಿಯಂತ್ರಣಾ ಮಾನ ದಂಡಗಳನ್ನು ಪಾಲಿಸಿಕೊಂಡು ಈ ಶಾಲಾ ಚುನಾವಣೆ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಮುಖ್ಯೋಪಾಧ್ಯಾಯರು ತಿಳಿಸಿದರು.
No comments:
Post a Comment