ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಶ್ರಯದಲ್ಲಿ ಸೇವಾ ಸಾಂಘಿಕ್ ಯೋಜನೆಯಡಿಯಲ್ಲಿ ಕುಳೂರು ಘಟಕದ ವತಿಯಿಂದ ಶಾಲಾ ಪರಿಸರ ಶುಚೀಕರಣ ನಡೆಯಿತು. ಕೊರೋನ ಬಾಧೆಯಿಂದ ಮಕ್ಕಳ ಓಡಾಟವಿಲ್ಲದೆ ಶಾಲೆಯ ಸುತ್ತಲೂ ಹುಲ್ಲು, ಪೊದರುಗಳು ಬೆಳೆದಿದ್ದು, ಇದರ ತೆರವು ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಶಾಲಾ ಪರವಾಗಿ ಧನ್ಯವಾದಗಳನ್ನು ಅರ್ಪಿಸಲಾಯಿತು.
FLASH NEWS
Sunday 29 November 2020
Sunday 22 November 2020
ಕುಟುಂಬಶ್ರೀ ಸದಸ್ಯೆಯರಿಂದ ಶ್ರಮದಾನ
ಕೊರೋನ ಬಾಧೆಯಿಂದ ಮುಚ್ಚಲ್ಪಟ್ಟಿರುವ ಶಾಲೆಯು ಮಕ್ಕಳಿಲ್ಲದೆ ಬಣ ಬಣಗುಟ್ಟುತ್ತಿದೆ. ಶಾಲಾ ಪರಿಸರ ಜನ ಸಂಚಾರವಿಲ್ಲದೆ ಪೊದರು ಬೆಳೆದು ನಿಂತಿದೆ. ಇವುಗಳನ್ನು ಶ್ರಮದಾನದ ಮೂಲಕ ಇಂದು ಸ್ಥಳೀಯ ಕುಟುಂಬಶ್ರೀಯ ವಿವಿಧ ಘಟಕಗಳ ಸದಸ್ಯೆಯರು ಶುಚೀಕರಣ ಮಾಡುವ ಮೂಲಕ ಶಾಲಾ ಪರಿಸರ ಶುಚೀಕರಣದ ಶ್ರಮದಾನಕ್ಕೆ ಚಾಲನೆ ನೀಡಿದರು. ಇವರಿಗೆ ಶಾಲಾ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಲಾಯಿತು.
Friday 13 November 2020
Subscribe to:
Posts (Atom)