FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Sunday 28 August 2016

ಕೈತೋಟ ನಿರ್ಮಾಣ ಹಾಗೂ ಸ್ವಚ್ಛತಾ ಕಾರ್ಯಕ್ರಮ

         ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಕುಂಬಳೆ ಇದರ ಅಂಗವಾದ ಶ್ರೀ ನಿತ್ಯಾನಂದ ನವಜೀವನ ಸ್ವ-ಸಹಾಯ ಸಂಘ, ಕುಳೂರು ಇದರ ಎರಡನೇ ವಾರ್ಷಿಕೋತ್ಸವದ ಸಲುವಾಗಿ ನಮ್ಮೀ ಕುಳೂರು ಶಾಲೆಯಲ್ಲಿ 'ಕೈ ತೋಟ ನಿರ್ಮಾಣ ಮತ್ತು ಸ್ಸಚ್ಛತಾ ಕಾರ್ಯಕ್ರಮವು ತಾ. 28-08-2016 ನೇ ಆದಿತ್ಯವಾರದಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ನ್ಯಾಯವಾದಿ ಶ್ರೀ ಗಂಗಾಧರ ಕೊಂಡೆವೂರುರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ ವಿ.ಪಿ, ಯೋಜನಾಧಿಕಾರಿ ಶ್ರೀಮತಿ ಸಂಧ್ಯಾ ಶೆಟ್ಟಿ, ನಾರಾಯಣ ನೈಕ್, ಶ್ರೀ ಚಂಚಲಾಕ್ಷ, ಶ್ರೀ ಮೋನಪ್ಪ ಪೂಜಾರಿ ಕಲ್ಕಾರ್, ಶ್ರೀ ಶುಭಾನಂದ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವಿನೋದ್ ಕುಮಾರ್ ಬಿ, ಶಾಲಾ ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಸೌಮ್ಯಲತಾ, ಶಾಲಾ ಮಾತೃ ಸಂಘದ ಅದ್ಯಕ್ಷೆ ಶ್ರೀಮತಿ ಮಮತಾ ಉಪಸ್ಥಿತರಿದ್ದರು. ಕೈತೋಟದಲ್ಲಿ ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿರವರು ತರಕಾರಿ ಗಿಡ ನೆಡುವ ಮೂಲಕ ಕೈತೋಟ ನಿರ್ಮಾಣಕ್ಕೆ ಚಾಲನೆ ನೀಡಿದರು. ಶಾಲಾ ಅಧ್ಯಾಪಿಕೆ ಶ್ರೀಮತಿ ಸೌಮ್ಯ ಪಿ ಸ್ವಾಗತಿಸಿ, ಶ್ರೀ ಪ್ರಮೋದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.








Monday 15 August 2016

ಸಂಭ್ರಮದ 70 ನೇ ಸ್ವಾತಂತ್ರ್ಯೋತ್ಸವ

       ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 70 ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
         ಆ ಪ್ರಯುಕ್ತ ಬೆಳಿಗ್ಗೆ ಆಕರ್ಷಕ ಮೆರವಣಿಗೆಯು ನಡೆಯಿತು. ಬಳಿಕ ನಡೆದ ಧ್ವಜಾರೋಹಣವನ್ನು ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿಯವರು ನೆರವೇರಿಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಲಾ ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಸೌಮ್ಯಲತಾ ವಹಿಸಿದ್ದರು. ಮುಖ್ಯ ಅತಿಥಿಯಾಗಿ ವಾರ್ಡ್ ಸದಸ್ಯೆ ಶ್ರೀಮತಿ ಚಂದ್ರಾವತಿ, ಹಾಗೂ ಶಾಲಾ ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಮತಾ ಉಪಸ್ಥಿತರಿದ್ದರು. ಶ್ರೀ ನಾರಾಯಣ ನಾೈಕ್ ಹಾಗೂ ಶ್ರೀ ಹರಿರಾಮ್ ಶುಭಾಶಂಸನೆಗೈದರು ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ವಿನೋದ್ ಕುಮಾರ್ ಸ್ವಾಗತಿಸಿ, ಅಧ್ಯಾಪಿಕೆ ಶ್ರೀಮತಿ ಸೌಮ್ಯ ಪಿ ವಂದಿಸಿದರು. ಅಧ್ಯಾಪಕ ಶ್ರೀ ಜಯಪ್ರಶಾಂತ್
ಪಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿದವು. ಇದೇ ಸಂದರ್ಭದಲ್ಲಿ ಶಾಲಾ ಹಳೇ ವಿದ್ಯಾರ್ಥಿಗಳು, ಊರ ಬಾಂಧವರು ಸಿಹಿತಿಂಡಿಗಳನ್ನು ಹಂಚಿದರು.















Thursday 11 August 2016

ಆಟಿಕಳಂಜನ ಭೇಟಿ

ಆಟಿಕಳಂಜನ ಭೇಟಿ
ಕಳೆಂಜೆ ಕಳೆಂಜೆನೊ - ಕಳೆಂಜೆ
ಏರೆನ ಮಗೇನೋ?|
ಮಾಯತರಸು ಮಗೇ - ಕಳೆಂಜೆ
ಮಾಯತ ಪುಟ್ಟಾಂಡೆ|
ಮಾಯತ ಪುಟ್ಟಾಂಡೆ - ಕಳೆಂಜೆ
ಜೋಗೊತ ಬಲೆಕ್ಕಾಂಡೆ|
ಪತ್ತೇ ಕಾಲೊಂಡ - ಕಳೆಂಜೆ
ಪದಿನಾಜಿ ಪಿರಯಾಂಡೆ|
ಪದಿನಾಜಿ ಪಿರಯೋಡು ಕಳೆಂಜೆ
ಊರುದಪ್ಪೊಡೆಂದ್|
ಊರುದತ್ತೆನೇ ಕಳೆಂಜೆ
ಕುಂಬಳೆ ಸೀಮೇಗ್..........
ಈ ರೀತಿ 'ಸಂಧಿ' ಹಾಡಿಗೆ ಆಟಿ ತಿಗಳಲ್ಲಿ ಕುಣಿಯುತ್ತಾ ಬರುವ ಆಟಿಕಳಂಜ ತುಳುನಾಡಿನ ಜನಪದ ಕಲೆಗಳಲ್ಲಿ ಒಂದಾಗಿದೆ. ಆಟಿ ತಿಂಗಳಲ್ಲಿ ಮನುಷ್ಯರಿಗೂ, ಜಾನುವಾರುಗಳಿಗೂ ರೋಗರುಜಿನಗಳು ಹೆಚ್ಚಾಗಿ ಬಾಧಿಸುತ್ತವೆ ಎಂದೂ ಇವುಗಳ ನಿವಾರಣೆಗಾಗಿ ಆಟಿಕಳಂಜ ಬರುತ್ತಾನೆಂದೂ ಜನರ ನಂಬುತ್ತಾರೆ.
     ಇಂತಹ ಜನಪದ ಕಲೆಗಳು ಅಳಿವಿನಂಚಿನಲ್ಲಿ ಸಾಗುತ್ತಿವೆಯಾದರೂ ಕುಳೂರಿನಂತಹ ಕೆಲವೊಂದು ಸ್ಥಳಗಳಲ್ಲಿ ಈಗಲೂ ಬರುತ್ತಿರುವುದು ಸಂತಸದ ವಿಷಯ. ಆಟಿಕಳಂಜ ನಮ್ಮ ಶಾಲೆಗೂ ಬಂದು ಕುಣಿದಾಗ ಮಕ್ಕಳು ಸಂತಸಪಟ್ಟರು. ಜೊತೆಗೆ ಆಟಿಕಳಂಜನ ಹಿನ್ನೆಲೆ ಕಥೆಯನ್ನು ತಿಳಿದುಕೊಂಡರು.




Saturday 6 August 2016

ಹಿರೋಶಿಮಾ ದಿನಾಚರಣೆ

                   ನಮ್ಮ ಶಾಲೆಯಲ್ಲಿ ಹಿರೋಶಿಮಾ ದಿನಾಚರಣೆಯನ್ನು ಆಚರಿಸಲಾಯಿತು. ಆ ಪ್ರಯುಕ್ತ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಗಣೇಶ್ ರಾವ್ ರವರು ದಿನದ ಮಹತ್ವವನ್ನು ಮಕ್ಕಳಿಗೆ ತಿಳಿಸಿದರು. ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ ರವರು ಹಿರೋಶಿಮಾ ದಿನದ ಹಿನ್ನೆಲೆಯನ್ನು ತಿಳಿಸಿಕೊಟ್ಟರು. ಶಾಲಾ ಅಧ್ಯಾಪಿಕೆ ಶ್ರೀಮತೀ ಸೌಮ್ಯ ಪಿ ಉಪಸ್ಥಿತರಿದ್ದರು.