FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Saturday 17 September 2022

ಶಾಲಾ ತರಕಾರಿ ತೋಟದಲ್ಲಿ ಹಳೆ ವಿದ್ಯಾರ್ಥಿಗಳ ಶ್ರಮದಾನ

         ಪ್ರತೀ ವರ್ಷ ಶಾಲಾ ತರಕಾರಿ ತೋಟ ನಿರ್ಮಾಣ ಮಾಡಿ ಮಾದರಿ ಎನಿಸಿದ ನಮ್ಮೀ ಶಾಲೆಯಲ್ಲಿ ಈ ವರ್ಷವೂ ತರಕಾರಿ ತೋಟ ನಿರ್ಮಾಣಕ್ಕೆ ಇಂದು ಶ್ರಮದಾನ ನಡೆಯಿತು.

         ನಮ್ಮೀ ಶಾಲೆಯ ಹೆಮ್ಮೆಯ ಹಳೆ ವಿದ್ಯಾರ್ಥಿಗಳಾದ, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಜಯರಾಜ್ ಶೆಟ್ಟಿ ಚಾರ್ಲ ಮತ್ತು ಸಕ್ರಿಯ ಕಾರ್ಯಕರ್ತ ಹರಿರಾಮ ಕುಳೂರು ರವರು ಹಳೆ ವಿದ್ಯಾರ್ಥಿ ಸಂಘದ ಪರವಾಗಿ ಇಂದು ಬೆಳಗ್ಗಿನಿಂದ ಸಂಜೆಯ ತನಕ ಶಾಲಾ ತರಕಾರಿ ತೋಟದಲ್ಲಿ ಕೃಷಿ ಮಾಡಲು ಶ್ರಮದಾನ ನಡೆಸಿದರು.

      ಮೊದಲ ಹಂತವಾಗಿ ತೊಂಡೆ ಕೃಷಿಗೆ ತರಕಾರಿ ತೋಟವನ್ನು ಸಜ್ಜುಗೊಳಿಸಿದರು. ಮುಂದಿನ ದಿನಗಳಲ್ಲಿ ಇತರ ತರಕಾರಿ ಉಪ ಬೆಳೆಗಳನ್ನು ಬೆಳೆಸುವ ಯೋಜನೆಯನ್ನೂ ಹಾಕಿಕೊಂಡರು.

       ತರಕಾರಿ ತೋಟ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವುದರೊಂದಿಗೆ ತರಕಾರಿ ಕೃಷಿ ಮಾಡಲೂ ತಮ್ಮ ಸಮಯವನ್ನು ಮೀಸಲಿಟ್ಟು ಸಹಕರಿಸಿದ ಇಬ್ಬರಿಗೂ ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದ ಪರವಾಗಿ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಲಾಯಿತು.






      

No comments:

Post a Comment