FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Wednesday 31 January 2018

ಮಧುರ ಕನ್ನಡ ವಿಜಯ ಘೋಷಣೆ:

            ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 'ಮಧುರ ಕನ್ನಡ ವಿಜಯ ಘೋಷಣೆ' ಕಾರ್ಯಕ್ರಮ ನಡೆಯಿತು.
            ಕಾರ್ಯಕ್ರಮವನ್ನು ವಾರ್ಡ್ ಸದಸ್ಯೆಯಾದ ಚಂದ್ರಾವತಿ ವಿ.ಪಿ ರವರು ಉದ್ಘಾಟಿಸಿ 'ಸಾರ್ವಜನಿಕ ಶಿಕ್ಷಣ ಯಜ್ಞದ ಭಾಗವಾಗಿ ನಡೆಯುವ ಇಂತಹ ಕಾರ್ಯಕ್ರಮಗಳು ಮಕ್ಕಳನ್ನು ಇನ್ನಷ್ಟು ಮುಂದೆ ಬರುವಂತೆ ಮಾಡಿದೆ. ಎಲ್ಲರಿಗೂ ಅಂಗೀಕಾರ ದೊರೆತು ಶಾಲೆಯು ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯವಾಗುತ್ತಿದೆ' ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಟಿ.ಎ ಅಧ್ಯಕ್ಷ ಪ್ರಮೋದ್ ಶೆಟ್ಟಿ ಶಾಲೆದಪಡ್ಪು ವಹಿಸಿದ್ದರು. ಮಾತೃ ಸಂಘದ ಅಧ್ಯಕ್ಷೆ ಆಶಾಲತಾ ಕುಳೂರು, ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ಉಪಸ್ಥಿತರಿದ್ದರು. ವಾರ್ಡ್ ಸದಸ್ಯೆ ಮಧುರ ಕನ್ನಡದ ಮಕ್ಕಳಿಗೆ ಕೆಲವು ಓದುವಿಕೆಯ ಕಾರ್ಡುಗಳನ್ನು ಕೊಟ್ಟು ಓದಿಸಿದರು. ಮಕ್ಕಳು ಓದಿದುದನ್ನು ಕಂಡು ವಿಜಯ ಘೋಷಣೆ ಮಾಡಲಾಯಿತು. ಎಲ್ಲಾ ರಕ್ಷಕರು ಇದಕ್ಕೆ ಸಾಕ್ಷಿಯಾದರು. ಶಾಲಾ ಅಧ್ಯಾಪಕರಾದ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ಪಿ ವಂದಿಸಿದರು.







No comments:

Post a Comment