FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Wednesday 16 October 2019

ಮಂಜೇಶ್ವರ ಉಪಜಿಲ್ಲಾ ಶಾಸ್ತ್ರೋತ್ಸವದಲ್ಲಿ ಮಿಂಚಿದ ಕುಳೂರು ಶಾಲಾ ಪ್ರತಿಭೆಗಳು

           ಕೊಡ್ಲಮೊಗರು ಶ್ರೀ ವಾಣೀ ವಿಜಯ ಪ್ರೌಢಶಾಲೆಯಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವದಲ್ಲಿ ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಮಿಂಚಿರುವರು. ತೆಂಗಿನ ಗೆರಟೆಯಿಂದ ಉತ್ಪನ್ನ ತಯಾರಿಯ ಸ್ಪರ್ಧೆಯಲ್ಲಿ ಪ್ರಜ್ವಲ್ ಎ ಗ್ರೇಡ್'ನೊಂದಿಗೆ ಪ್ರಥಮ ಸ್ಥಾನ, ಶೀಟ್ ಮೆಟಲ್ ವರ್ಕ್ ನಲ್ಲಿ ಅಬ್ದುಲ್ ರಸ್ವೀನ್ ಎ. ಕೆ ಎ ಗ್ರೇಡ್ ನೊಂದಿಗೆ ಪ್ರಥಮ ಸ್ಥಾನ, ಮೆಟಲ್ ಎಂಗ್ರೇವಿಂಗ್ ನಲ್ಲಿ ಯಜ್ಞೇಶ್ ಕೆ ಎ ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನ, ಚಾಕ್ ನಿರ್ಮಾಣದಲ್ಲಿ ಶ್ರೇಣಿಕ್ ಕರ್ಕೇರ ಎ ಗ್ರೇಡ್ ನೊಂದಿಗೆ ತೃತೀಯ ಸ್ಥಾನ, ಎಂಬ್ರಾಯ್ಡರಿಯಲ್ಲಿ ಮರಿಯಮ್ ಐಫು ಎ ಗ್ರೇಡ್ ನೊಂದಿಗೆ ತೃತೀಯ ಸ್ಥಾನ ಹಾಗೂ ತಾಳೆ ಗರಿಯ ಉತ್ಪನ್ನದ ತಯಾರಿಯಲ್ಲಿ ನವ್ಯ ಎ ಗ್ರೇಡ್ ನೊಂದಿಗೆ ತೃತೀಯ ಸ್ಥಾನವನ್ನು ಪಡೆದಿರುವರು. ಇವರನ್ನು ಶಾಲಾ ಶಿಕ್ಷಕ ವೃಂದ, ರಕ್ಷಕ-ಶಿಕ್ಷಕ ಸಂಘ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘ ಅಭಿನಂದಿಸಿದೆ.


  ಅಬ್ದುಲ್ ರಸ್ವೀನ್ ಎ. ಕೆ

 ಪ್ರಜ್ವಲ್

 ಯಜ್ಞೇಶ್ ಕೆ

 ಶ್ರೇಣಿಕ್ ಕರ್ಕೇರ

 ನವ್ಯ

 ಮರಿಯಮ್ ಐಫು


No comments:

Post a Comment