FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Friday 14 February 2020

ರಕ್ಷಕರಿಗೆ ತರಬೇತಿ

       ನಮ್ಮ ಕುಳೂರು ಶಾಲೆಯಲ್ಲಿ ಶಾಲಾ ರಕ್ಷಕರಿಗೆ ತರಬೇತಿಯು ತಾ. 14-02-2020 ನೇ ಶುಕ್ರವಾರದಂದು ನಡೆಯಿತು. ಈ ಮಾಹಿತಿ ಶಿಬಿರವನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಜಯರಾಜ್ ಶೆಟ್ಟಿ ಚಾರ್ಲ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ, ಮಾತೃ ಪಿ. ಟಿ. ಎ ಅಧ್ಯಕ್ಷೆ ರಾಜಲಕ್ಷ್ಮಿ ದೇರಂಬಳ ಗುತ್ತು ಉಪಸ್ಥಿತರಿದ್ದರು. ನಾಲ್ಕನೇ ತರಬೇತಿ ಮಕ್ಕಳಿಗಿರುವ ಎಲ್. ಎಸ್. ಎಸ್ ಪರೀಕ್ಷೆಯ ಕುರಿತು ಹಾಗೂ ಕಲಿಕಾ ಹಂತಗಳ ಕುರಿತಾಗಿ ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ತರಗತಿ ನಡೆಸಿಕೊಟ್ಟರು.




No comments:

Post a Comment