FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Sunday 11 July 2021

ಆಟದ ಉದ್ಯಾನದ ನಿರ್ಮಾಣಕ್ಕೆ ಶ್ರಮದಾನ

          ಕುಳೂರು ಶಾಲೆಯ ಮಹತ್ವಾಕಾಂಕ್ಷೆಯ ಯೋಜನೆಯಾದ ಮಕ್ಕಳ ಆಟದ ಉದ್ಯಾನವನ್ನು ನಿರ್ಮಿಸಲು ಈಗಾಗಲೇ ಯೋಜನೆ ರೂಪಿಸಿದ್ದು, ಇದರಂಗವಾಗಿ ಈ ಯೋಜನೆಯ ಪ್ರಾಯೋಜಕತ್ವವನ್ನು ವಹಿಸಿರುವ ಶಾಲಾ ಹಳೆ ವಿದ್ಯಾರ್ಥಿ ಹಾಗೂ ಮುಂಬೈಯ ಖ್ಯಾತ ಉದ್ಯಮಿ ಮೋಹನ್ ಶೆಟ್ಟಿ ಮಜ್ಜಾರ್ ಇವರು ಶಾಲೆಗೆ ಭೇಟಿಯಿತ್ತು, ಕಾಮಗಾರಿ ಪ್ರಾರಂಭಿಸಿಸಲು ಸೂಚಿಸಿರುವ ಬೆನ್ನಲ್ಲೇ, ಆಟದ ಉದ್ಯಾನ ನಿರ್ಮಿಸುವ ಸ್ಥಳವನ್ನು ಶ್ರಮದಾನ ಮಾಡುವ ಮೂಲಕ ಶುಚೀಕರಣ ಮಾಡಲಾಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಈ ಶ್ರಮದಾನ ಕಾರ್ಯದಲ್ಲಿ ಕೈ ಜೋಡಿಸಿದರು.  


ಮೋಹನ್ ಶೆಟ್ಟಿ ಮಜ್ಜಾರ್ ಶಾಲೆಗೆ ಭೇಟಿಯಿತ್ತ ಸಂದರ್ಭ... 







No comments:

Post a Comment