FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Tuesday 11 July 2017

ವಿಶ್ವ ಜನಸಂಖ್ಯಾ ದಿನಾಚರಣೆ

               ನಮ್ಮ ಕುಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನವನ್ನು ಆಚರಿಸಲಾಯಿತು.
               ಆ ಪ್ರಯುಕ್ತ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಶರ್ಮಾ ರವರು ಮಕ್ಕಳಿಗೆ ದಿನದ ಮಹತ್ವವನ್ನು ತಿಳಿಸಿಕೊಟ್ಟರು. ಬಳಿಕ ಮಕ್ಕಳಿಂದ 'ಜನಸಂಖ್ಯಾ ಹೆಚ್ಚಳದ ಒಳಿತು ಮತ್ತು ಕೆಡುಕುಗಳು' ಎಂಬ ವಿಷಯದ ಕುರಿತು ಸಂವಾದ ನಡೆಯಿತು. ಈ ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರು ಉದ್ಘಾಟಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ಸೌಮ್ಯ ಪಿ ಸಂವಾದದ ಮದ್ಯಸ್ಥಿಕೆಯನ್ನು ವಹಿಸಿದ್ದರು. ಮಕ್ಕಳ ಎರಡು ಗುಂಪುಗಳ ನಡುವೆ ಸಂವಾದ ನಡೆಯಿತು. ಶಾಲಾ ನಾಯಕಿ ಕುಮಾರಿ ಶ್ರೇಯಾ ಕರ್ಕೇರ ಸ್ವಾಗತಿಸಿ, ಉಪನಾಯಕ ಶ್ರವಣ್ ಕುಮಾರ್ ವಂದಿಸಿದರು. ಶಾಲಾ ಅಧ್ಯಾಪಕರಾದ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ, ರೇಶ್ಮಾ, ಶ್ವೇತಾ ಸಹಕರಿಸಿದರು.



No comments:

Post a Comment