FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Monday 17 July 2017

ಶಾಲಾ ಮಕ್ಕಳ ಬಯಲು ಪ್ರವಾಸ

                 ಕುಳೂರಿನಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಕೃಷಿಯ ಕುರಿತಾಗಿ ಮಾಹಿತಿಯನ್ನು ತಿಳಿಯಲು ಬಯಲು ಪ್ರವಾಸ ಕೈಗೊಂಡರು.
                  ಕುಳೂರು ಪೊಯ್ಯೆಲ್'ನಲ್ಲಿನ ಪ್ರಗತಿಪರ ಕೃಷಿಕರಾದ ಶ್ರೀ ಪಿ.ಆರ್.ಶೆಟ್ಟಿ ಯವರ ಕೃಷಿ ಭೂಮಿಗೆ ತೆರಳಿ ಭತ್ತ ಕೃಷಿಯ ವಿವಿಧ ವಿಧಾನಗಳನ್ನು ತಿಳಿದುಕೊಂಡರು. ಮಕ್ಕಳು ಸ್ವತಃ ಗದ್ದೆಗೆ ಇಳಿದು ನೇಜಿ ತೆಗೆಯುವ ಕಾಯಕವನ್ನು ಮಾಡಿ ಸ್ವ-ಅನುಭವವನ್ನು ಪಡೆದುಕೊಂಡರು. ಇದೇ ಸಂದರ್ಭದಲ್ಲಿ ನೇಜಿ ತೆಗೆಯುತ್ತಿದ್ದ ರಾಜೀವಿ ಪೊಯ್ಯೆಲುರವರು ಓಬೇಲೆ ಪಾಡ್ದನ ಹಾಡುವ ಮೂಲಕ ಮಕ್ಕಳನ್ನು ಹುರಿದುಂಬಿಸಿದರು. ಶ್ರೀ ಶಶಿಧರ ಪೊಯ್ಯೆಲ್, ಶ್ರೀ ಕೇಶವ ಕುಳಿಂಜರವರು ಮಾಡುತ್ತಿದ್ದ ಉಳುಮೆಯ ಕೆಲಸವನ್ನು ಕಂಡು ಮಾಹಿತಿಯನ್ನು ಪಡೆದರು. ಇದೇ ಸಂದರ್ಭದಲ್ಲಿ ಕೃಷಿ ಕಾಯಕದಲ್ಲಿ ನಿಪುಣತೆಯನ್ನು ಪಡೆದಿರುವ ಶ್ರೀ ಪ್ರಮೋದ್ ಶೆಟ್ಟಿ ಶಾಲೆದಪಡ್ಪು ರವರಲ್ಲಿ ಮಕ್ಕಳು ವಿಶೇಷ ಸಂದರ್ಶನ ನಡೆಸಿ ಕೃಷಿ ಕಾಯಕದ ಕುರಿತಾಗಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಂಡರು. ಮಕ್ಕಳ ಎಲ್ಲಾ ಪ್ರಶ್ನೆಗಳಿಗೆ ತಾಳ್ಮೆಯಿಂದ ಸವಿವರವಾಗಿ ಮಾಹಿತಿಯನ್ನು ಕೊಟ್ಟದ್ದು ಔಚಿತ್ಯಪೂರ್ಣವೆನಿಸಿತು. ಶಾಲಾ ಅಧ್ಯಾಪಕರಾದ ಶ್ರೀ ಜಯಪ್ರಶಾಂತ್ ಪಾಲೆಂಗ್ರಿ, ಶ್ರೀಮತಿ ಸೌಮ್ಯ ಪಿ, ಕುಮಾರಿ ಶ್ವೇತಾ ಬಯಲು ಪ್ರವಾಸದ ನೇತೃತ್ವ ವಹಿಸಿದ್ದರು.






No comments:

Post a Comment