FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Tuesday 19 June 2018

ವಾಚನಾ ಸಪ್ತಾಹ ಉದ್ಘಾಟನೆ

       ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಚನಾ ಸಪ್ತಾಹದ ಉದ್ಘಾಟನೆ ನಡೆಯಿತು.
ಪಿ.ಎನ್ ಪಣಿಕ್ಕರ್ ರವರ ಚರಮ ದಿನವನ್ನು ವಾಚನಾ ದಿನವಾಗಿ ಆಚರಿಸಿ ಒಂದು ವಾರಗಳ ಕಾಲ ವಾಚನಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪಿ.ಟಿ.ಎ ಅಧ್ಯಕ್ಷ ಪ್ರಮೋದ್ ಶೆಟ್ಟಿ ಸಾಲೆದಪಡ್ಪು ರವರು ನೆರವೇರಿಸಿ 'ತಲೆ ತಗ್ಗಿಸಿ ಪುಸ್ತಕ ಓದು, ಅದು ನಿನ್ನ ತಲೆ ಎತ್ತುವಂತೆ ಮಾಡುತ್ತದೆ ಎಂಬುದು ಸಾರ್ವಕಾಲಿಕ ಸತ್ಯ. ಓದುವುದರಿಂದ ಜ್ಞಾನ ಭಂಡಾರ ಹೆಚ್ಚಾಗುವುದಲ್ಲದೆ ಬುದ್ಧಿಯೂ ಚುರುಕಾಗುತ್ತದೆ' ಎಂದರು. ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮಾ ರವರು ಅಧ್ಯಕ್ಷತೆ ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಸ್ವಾಗತಿಸಿ, ಅಧ್ಯಾಪಿಕೆ ಸೌಮ್ಯ ಪಿ ವಂದಿಸಿದರು. ಅಧ್ಯಾಪಿಕೆಯರಾದ ನಯನ ಬೇರಿಕೆ, ಅಶ್ವಿನಿ ಎಲಿಯಾಣ ಸಹಕರಿಸಿದರು.






No comments:

Post a Comment