FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Monday 21 March 2022

ನಾಲ್ಕನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭ

        2021-22 ನೇ ಶೈಕ್ಷಣಿಕ ವರ್ಷದ ಕೊನೆಯ ದಿನಗಳಲ್ಲಿ ನಾವಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಶಾಲೆಯ ನಾಲ್ಕನೇ ತರಗತಿ ಮಕ್ಕಳನ್ನು ಇಂದು ಬೀಳ್ಕೊಡುಗೆ ಸಮಾರಂಭ ಮಾಡುವ ಮೂಲಕ ಅಭಿನಂದಿಸಲಾಯಿತು.

       ಕಾರ್ಯಕ್ರಮದಲ್ಲಿ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಸತೀಶ್ ಎಲಿ ಯಾನ, ಮಾತೆಯರ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಪ್ರಫುಲ್ಲ ಕುಮಾರಿ, ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ಪಿ ರವರು ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು. ರಕ್ಷಕರ ಪರವಾಗಿ ಸುಪ್ರೀತಾ ಕುಳೂರು ಹೊಸಮನೆ, ರಾಜಲಕ್ಷ್ಮಿ ದೇರಂಬಲ ಗುತ್ತು ಮಾತನಾಡಿ, ಶುಭ ಹಾರೈಸಿದರು.ಜೊತೆಗೆ ಶಾಲಾ ಶಿಕ್ಷಕಿಯರು ಶುಭ ಹಾರೈಸಿದರು. ಕುಮಾರಿ ಶ್ರೇಯ ಕೆ ಸಿ, ನಿತಿನ್ ಕುಮಾರ್, ಚಿನ್ಮಯಿ ಜೆ ಆಳ್ವ, ಆಕಾಶ್ ಶೆಟ್ಟಿ, ಸಾನ್ವಿತ್ ಶೆಟ್ಟಿ ಮಾತನಾಡಿ ಅನುಭವ ಹಂಚಿಕೊಂಡರು.

       ಬೀಳ್ಕೊಡುಗೆ ಸಮಾರಂಭದ ಪರವಾಗಿ ನಾಲ್ಕನೇ ತರಗತಿಯ ರಕ್ಷಕರು ಎಲ್ಲರಿಗೂ ಸಿಹಿಯೊಂದಿಗೆ ಪಾಯಸ ದೂಟದ ವ್ಯವಸ್ಥೆ ಮಾಡಿದ್ದರು.





















No comments:

Post a Comment