FLASH NEWS

WELCOME TO OUR SCHOOL BLOG.... ನಮ್ಮ ಶಾಲಾ ಬ್ಲಾಗ್'ಗೆ ಸುಸ್ವಾಗತ......

Monday 21 March 2022

ಉಲ್ಲಾಸ ಗಣಿತ ಮತ್ತು ಗಣಿತ ವಿಜಯ : ರಕ್ಷಕರಿಗೆ ತರಬೇತಿ

      ಎಳವೆಯಲ್ಲಿಯೇ ಗಣಿತ ವಿಷಯವನ್ನು ಮಕ್ಕಳಿಗೆ ಮತ್ತಷ್ಟು ಸರಳವಾಗಿಸಲು ಆಯೋಜಿಸಿದ ಉಲ್ಲಾಸ ಗಣಿತ ಮತ್ತು ಗಣಿತ ವಿಜಯ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ಹಾಗೂ ರಕ್ಷಕರಿಗೆ ತರಬೇತಿ ಇಂದು ನಡೆಯಿತು.

       ಕಾರ್ಯಕ್ರಮವನ್ನು ಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ಶರ್ಮ ರವರು ಔಪಚಾರಿಕವಾಗಿ ಉದ್ಘಾಟಿಸಿದರು. ಬಳಿಕ ಒಂದು ಮತ್ತು ಎರಡನೇ ತರಗತಿಯ ಮಕ್ಕಳಿಗೆ ಉಲ್ಲಾಸ ಗಣಿತ ಹಾಗೂ ಮೂರು ಮತ್ತು ನಾಲ್ಕನೇ ತರಗತಿಯ ಮಕ್ಕಳಿಗೆ ಗಣಿತ ವಿಜಯ ಕಾರ್ಯಕ್ರಮದ ತರಬೇತಿಯು ನಡೆಯಿತು. ಉಲ್ಲಾಸ ಗಣಿತ ತರಬೇತಿಯನ್ನು ಶಿಕ್ಷಕಿಯರಾದ ಸೌಮ್ಯ ಪಿ ಹಾಗೂ ನಯನ ಎಂ ನಡೆಸಿಕೊಟ್ಟರು. ಗಣಿತ ವಿಜಯ ತರಬೇತಿಯನ್ನು ಶಿಕ್ಷಕ ಜಯಪ್ರಶಾಂತ್ ಪಾಲೆಂಗ್ರಿ ಹಾಗೂ ಶಿಕ್ಷಕಿ ಚೇತನ ನಡೆಸಿಕೊಟ್ಟರು. ರಕ್ಷಕರು ತಮ್ಮ ಮಕ್ಕಳೊಂದಿಗೆ ಹಲವಾರು ಚಟುವಟಿಕೆಗಳಲ್ಲಿ ಭಾಗವಹಿಸಿದರು. ಜೊತೆಗೆ ಉಲ್ಲಾಸ ಗಣಿತ ಮತ್ತು ಗಣಿತ ವಿಜಯ ಚಟುವಟಿಕೆಗಳಿಗೆ ಸಂಬಂಧಿಸಿದ ಕಿಟ್ ವಿತರಣೆ ಮಾಡಲಾಯಿತು.




















No comments:

Post a Comment