ಆಷಾಡ ಮಾಸದ ವಿಶೇಷತೆಯ ಕುರಿತು ಮಕ್ಕಳಲ್ಲಿ ತಿಳುವಳಿಕೆ ಮೂಡಿಸಲು ಹಾಗೂ ಹಿಂದಿನ ಕಾಲದ ಜನರು ಆಷಾಡ ಮಾಸ ಅಥವಾ ಆಟಿ ತಿಂಗಳಲ್ಲಿ ಅನುಭವಿಸುತ್ತಿದ್ದ ಕಷ್ಟ, ಸಮಸ್ಯೆಗಳು ಹಾಗೂ ಅದರಿಂದ ಅವರು ಕಂಡುಕೊಳ್ಳುತ್ತಿದ್ದ ಪರಿಹಾರ ಮಾರ್ಗಗಳ ಕುರಿತು ತಿಳಿಯಲು 'ಆಷಾಡ ಸಂಭ್ರಮ' ಎಂಬ ವಿಶೇಷ ಕಾರ್ಯಕ್ರಮವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು.
ಆಟಿ ತಿಂಗಳಲ್ಲಿ ತಯಾರಿಸುವ ವಿವಿಧ ಖಾದ್ಯಗಳನ್ನು ಶಾಲೆಯಲ್ಲೇ ತಯಾರಿಸಿ ಮಕ್ಕಳಿಗೆ ಪರಿಚಯಿಸಲಾಯಿತು. ಇದಕ್ಕೆ ಬೇಕಾಗುವ ವಸ್ತುಗಳನ್ನು ಶಾಲಾ ಮಕ್ಕಳು ಹಾಗೂ ಅಧ್ಯಾಪಕರು ತಂದು ಸಹಕರಿಸಿದರು. ಇದೇ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿ ವಂಶಿಕ್ ಆಟಿ ತಿಂಗಳ ವಿಶೇಷತೆಯ ಕುರಿತು ತುಳುವಲ್ಲಿ ವಿವರಣೆ ನೀಡಿ ಎಲ್ಲರ ಗಮನ ಸೆಳೆದನು.
No comments:
Post a Comment